ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ಮಾರ್ನಬೈಲು ಶ್ರೀ ಮಾರಣ ಗುಳಿಗ ದೈವದ ಕೋಲೋತ್ಸವ

ಇಂದು ಮಾರ್ನಬೈಲು ಶ್ರೀ ಮಾರಣ ಗುಳಿಗ ದೈವದ ಕೋಲೋತ್ಸವ


ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಶ್ರೀ ಮಾರಣ ಗುಳಿಗ ಕ್ಷೇತ್ರದಲ್ಲಿ ಇಂದು ವರ್ಷಾವಧಿ ಕೋಲೋತ್ಸವ ಸಂಭ್ರಮದಿಂದ ನಡೆಯುತ್ತಿದೆ.


ಈ ಕ್ಷೇತ್ರ ಕಾರಣಿಕ ಕ್ಷೇತ್ರವಾಗಿದ್ದು, ಇಂದು ಗುಳಿಗ ದೈವದ ವೈಭವದ ಕೋಲೋತ್ಸವ ನಡೆಯಲಿದೆ. ಗುಳಿಗ ದೈವದ ಕೋಲೋತ್ಸವಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೋಲೋತ್ಸವದ ಪ್ರಯುಕ್ತವಾಗಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 6.30ಕ್ಕೆ ಲಯನ್ ಕಿಶೋರ್ ಡಿ ಶೆಟ್ಟಿಯವರ ನಿರ್ದೇಶನದಲ್ಲಿ, ಲಕುಮಿ ತಂಡದ ಕುಸಾಲ್ದ ಕಲಾವಿದರಿಂದ ಲೇಲೆಪಾಡಡೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.


ಬಳಿಕ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಕಾರಣಿಕದ ದೈವ ಶ್ರೀ ಮಾರಣ ಗುಳಿಗ ದೈವದ ಕೋಲೋತ್ಸವ ನಡೆಯಲಿದೆ. ಕ್ಷೇತ್ರಕ್ಕೆ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್ ಕಟೀಲ್ ರವರು ಆಗಮಿಸಲಿದ್ದು, ಎಲ್ಲರಿಗೂ ಶ್ರೀ ಮಾರಣ ಗುಳಿಗ ಸಾಂಸ್ಕೃತಿಕ ಸೇವಾ ಸಮಿತಿ ಸ್ವಾಗತ ಕೋರಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم