ಮಂಗಳೂರು : ನಿಲ್ಲಿಸಿದ್ದ ಬಸ್ ನಿಂದ ಹಣ ಕಳವು ಮಾಡಲಾಗಿದೆ ಎನ್ನಲಾದ ಸಿಸಿ ಕೆಮರಾ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಪ್ಪಿನಂಗಡಿ- ಸ್ಟೇಟ್ಬ್ಯಾಂಕ್ ನಡುವೆ ಸಂಚರಿಸುವ ಖಾಸಗಿ ಬಸ್ನ್ನು ಸ್ಟೇಟ್ಬ್ಯಾಂಕ್ನಲ್ಲಿ ಬಸ್ ನ್ನು ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದು ಈ ವೇಳೆ ಬಸ್ನೊಳಗೆ ಪ್ರವೇಶಿಸಿದ ಓರ್ವ ಬಸ್ನಲ್ಲಿದ್ದ ಹಣ ಕಳವು ಮಾಡಿದ ಪ್ರಕರಣ ವರದಿಯಾಗಿದೆ.
ಈ ವೇಳೆ ಬಸ್ನಲ್ಲಿ ಬೇರೆ ಯಾರೂ ಇರಲಿಲ್ಲ. ಕಳವು ಮಾಡಲಾಗಿದೆ ಎನ್ನಲಾದ ದೃಶ್ಯ ಬಸ್ನಲ್ಲಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಬಸ್ ನಿರ್ವಾಹಕ ಬ್ಯಾಗ್ನಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳ ದೋಚಿದ್ದಾನೆನ್ನಲಾಗಿದೆ.
ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Post a Comment