ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲ್ಲಕಟ್ಟದಲ್ಲಿ ಗೋವಿಗಾಗಿ ಮೇವು- ಸಂಗ್ರಹ ಕಾರ್ಯ

ಕಲ್ಲಕಟ್ಟದಲ್ಲಿ ಗೋವಿಗಾಗಿ ಮೇವು- ಸಂಗ್ರಹ ಕಾರ್ಯ


ನೀರ್ಚಾಲು: ಶುಕ್ರವಾರದಂದು (ಜ.28) ಕಲ್ಲಕಟ್ಟದಲ್ಲಿ ನಾರಾಯಣ ಭಟ್ ಪಾಡಿ ಇವರ ಮನೆಯ ಸಮೀಪದ ಪಾಡಿ ಶ್ಯಾಮ್ ಭಟ್ ಮತ್ತು ಪಾಡಿ ನಾರಾಯಣ ಭಟ್ಟರಿಗೆ ಸೇರಿದ ಸ್ಥಳದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಗಾಗಿ 'ಮುಳಿಹುಲ್ಲು ಸಂಗ್ರಹಿಸುವ' ಕಾರ್ಯ ನಡೆಯಿತು.


ಈ ಸಂಬಂಧ ನಾರಾಯಣ ಭಟ್ ಪಾಡಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಕಲ್ಲಕಟ್ಟ ಮುಳ್ಳೇರಿಯಾ ಮಂಡಲದ ಮಾತೆಯರಿಗೆ, ಮಕ್ಕಳಿಗೆ ಮತ್ತು ಮಹನೀಯರಿಗೆ ತುಂಬಾ ಸಹಕಾರವನ್ನು ನೀಡೀದರು. ಮತ್ತು ಗೋಕಿಂಕರರ ಈ ಕಾರ್ಯಕ್ಕೆ ಪಕ್ಕದ ಕ್ಲಬ್‌ನ ಸದಸ್ಯರೂ ಸೇರಿಕೊಂಡಿದ್ದರು.


ಮುಳ್ಳೇರಿಯಾ ಮಂಡಲದ ಮಾತೆಯರು (ಮಾತೃವಿಭಾಗ), ವಿದ್ಯಾರ್ಥಿವಾಹಿನಿ ವಿಭಾಗದ ಮಕ್ಕಳು ಮತ್ತು ಮಹನೀಯರು ಸೇರಿದಂತೆ ಸುಮಾರು 70 ಮಂದಿ ಗೋಕಿಂಕರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


ಶ್ರೀಮತಿ ವಿಜಯಲಕ್ಷ್ಮೀಯವರು ಗೋಕಿಂಕರರಿಗೆಲ್ಲ ಬಾಯಾರಿಕೆಗೆ ಮಜ್ಜಿಗೆನೀರು, ಜ್ಯೂಸ್‌ಗಳು, ತಿಂಡಿಯ ವ್ಯವಸ್ಥೆ, ವಿವಿಧ‌ ಹಣ್ಣುಗಳು ಸೇರಿದಂತೆ ಭರ್ಜರಿಯಾದ ಆತಿಥ್ಯವನ್ನೇ ನೀಡಿದರು. ಒಂದು ಲೋಡು ಮುಳಿಹುಲ್ಲನ್ನು ಗೋಶಾಲೆಗೆ ಸಾಗಿಸಲಾಯಿತು.

ಸಂಜೆ ಆರರ ಹೊತ್ತಿಗೆ "ಸೇವಾ ಅರ್ಘ್ಯ- ಗೋವಿಗಾಗಿ ಮೇವು, ಮೇವಿಗಾಗಿ ನಾವು" ಕಾರ್ಯಕ್ರಮ ಸಮಾಪ್ತಿಯಾಯಿತು.

-ಅಭಿಜ್ಞಾ ಭಟ್ ಬೊಳುಂಬು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post