ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಖ್ಯಮಂತ್ರಿ ಬೊಮ್ಮಾಯಿಗೆ ನಮ್ಮ ಮಂಗಳೂರು ಪುಸ್ತಕ ಹಸ್ತಾಂತರ

ಮುಖ್ಯಮಂತ್ರಿ ಬೊಮ್ಮಾಯಿಗೆ ನಮ್ಮ ಮಂಗಳೂರು ಪುಸ್ತಕ ಹಸ್ತಾಂತರ

 


ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ರಚಿಸಿದ ನಮ್ಮ ಮಂಗಳೂರು ಪುಸ್ತಕವನ್ನು ಮಂಗಳೂರು ಗೌರವಾನ್ವಿತ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರಿನಲ್ಲಿ ಹಸ್ತಾಂತರಿಸಿದರು.

ಈ ಪುಸ್ತಕದಲ್ಲಿ ಮಂಗಳೂರಿನ ಸಮಗ್ರ ಮಾಹಿತಿ ಒಳಗೊಂಡಿದೆ. ಪುಸ್ತಕದ ಬಗ್ಗೆ ಸಿಎಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಪುಸ್ತಕದಲ್ಲಿ ಏನೇನಿದೆ?

* ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಅತ್ಯಪೂರ್ವ ಮಾಹಿತಿಗಳಿರುವ ಅಪರೂಪದ ಕೃತಿ.


* ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪೂರ್ತಿ ಚಿತ್ರಣ.


* ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲಾ ಶ್ರದ್ಧಾ ಕೇಂದ್ರಗಳ ವಿವರಗಳು.


* ಶೈಕ್ಷಣಿಕ ಹಬ್ ಎಂಬ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಎಷ್ಟು ಶಾಲೆ, ಕಾಲೇಜು, ವೈದ್ಯಕೀಯ, ಎಂಜೀನಿಯರಿಂಗ್, ವೃತ್ತಿಪರ ಕಾಲೇಜುಗಳಿವೆ ಎಂಬುವುದರ ಡಿಟೈಲ್ಸ್ ನಮ್ಮ ಮಂಗಳೂರು ಗ್ರಂಥದಲ್ಲಿದೆ. 


* ಮಂಗಳೂರು ಸುತ್ತಮುತ್ತ ಎಷ್ಟು ಆಸ್ಪತ್ರೆಗಳಿವೆ, ಹೊಟೇಲ್‌ಗಳಿವೆ ಎಂಬುವುದರ ಚಿತ್ರಣ.


* ಮಂಗಳೂರು ಸುತ್ತಮುತ್ತ ಇರುವ ಕೆರೆ, ಮಾರುಕಟ್ಟೆ, ಮೈದಾನ, ಪಾರ್ಕ್, ಕ್ರೀಡಾಂಗಣ, ಸ್ಮಶಾನಗಳ ಮಾಹಿತಿಗಳು


* ನಮ್ಮ ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕಾರ್ಪೊರೇಟರ್‌ಗಳ ಸಚಿತ್ರ ವಿವರಗಳು.


* ಕಾರ್ಪೊರೇಶನ್‌ನಿಂದ ನಾಗರಿಕರಿಗೆ ಲಭಿಸುವ ಸೌಲಭ್ಯಗಳೇನು, ಅದನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮಾರ್ಗದರ್ಶಿ ಮಾಹಿತಿ.


* ಮಂಗಳೂರಿನ ಅಪರೂಪದ ಫೋಟೋಗಳ ಸಂಗ್ರಹ.


* ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳುಗಳ ದೂರವಾಣಿ ಸಂಖ್ಯೆಗಳು.


* ಯಾವ ನಂಬರ್‌ನ ಬಸ್ ಎಲ್ಲಿ ಸಂಚರಿಸುತ್ತೆ ಎಂಬುದರ ಮಾಹಿತಿಗಳು.


ಸಂಗ್ರಹ ಯೋಗ್ಯ ಅಪರೂಪದ ಕೃತಿ ನಮ್ಮ ಮಂಗಳೂರು.


ನಮ್ಮ ಮಂಗಳೂರು ಕೃತಿಗಾಗಿ ಸಂಪರ್ಕಿಸಿರಿ: 9343381791/ 9731976777

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم