ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತ್ಯು

ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತ್ಯು

 



ಕಾಸರಗೋಡು :ಮೀನುಗಾರಿಕೆ ವೇಳೆಯಲ್ಲಿ ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತಪಟ್ಟ ಘಟನೆಯೊಂದು ಉದುಮ ಸಮೀಪದ ಹೊಳೆಯಲ್ಲಿ  ನಡೆದಿದೆ.


ಚೆಂಬರಿಕ ನಿವಾಸಿ ಅಹ್ಮದ್ ಯಾನೆ ಆಮು(60) ವರ್ಷ ಮೃತಪಟ್ಟವರು. ಅವರು ಇಂದು ಬೆಳಗ್ಗೆ ನದಿಯಲ್ಲಿ ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಈ ದುರಂತ ಸಂಭವಿಸಿದೆ.


 ಹತ್ತಿರದಲ್ಲಿದ್ದವರು ಕೂಡಲೇ ಅಹ್ಮದ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರು ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.


ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم