ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಎಬಿವಿಪಿ ಕರ್ನಾಟಕ ಹಾಗೂ ಎಸ್ ಎಫ್ ಡಿ ಆಕ್ಸಿಜನ್ ಚಾಲೆಂಜ್ ಅಭಿಯಾನವನ್ನು ನಡೆಸಿತು. ಕಾವೂರು ಬಿಜೆಪಿ ಕಚೇರಿಯಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಅವರಿಗೆ ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕರಾದ ನಿಶಾನ್ ಆಳ್ವ ಕಾವೂರು ಅವರು ಸಸಿಯನ್ನು ನೀಡಿ ಈ ಚಾಲೆಂಜ್ ನ ಬಗ್ಗೆ ಮಾಹಿತಿ ನೀಡಿದರು.
ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಮಂಗಳೂರು ತಾಲೂಕು ಅಬಾವಿಪ ಸಂಚಾಲಕರಾದ ನಿಶಾನ್ ಆಳ್ವ ಕಾವೂರು, ವೃತ್ತ ಶಿಕ್ಷಣ ಪ್ರಮುಖರಾದ ಸಂಜನ್ ರಾಜ್, ಪಕ್ಷದ ಪ್ರಮುಖರು, ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق