ಹಾಸನ: ಪೋಷಕರು ಎರಡನೇ ಮದುವೆ ಮಾಡಿದರೆಂದು ಮನನೊಂದ ಯುವತಿಯೊಬ್ಬಳು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ನಲ್ಲಿ ನಡೆದಿದೆ.
ಪ್ರಜ್ವಲ (26) ವರ್ಷದ ಯುವತಿ, ಸಾಧ್ವಿ (2) ವರ್ಷದ ಮಗು. ಮೃತ ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ಎಂಬಾತ ಕೆಲ ಸಮಯದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಪ್ರಜ್ವಲ ಈ ಆಘಾತದಿಂದ ಹೊರಬಂದಿರಲಿಲ್ಲ. ಆದರೆ ಪ್ರಜ್ವಲ ಪೋಷಕರು ಮಗಳ ಜೀವನ ಸರಿ ಹೋಗಲಿ ಎಂದು ಆನೆಮಹಲ್ ಗ್ರಾಮದ ವ್ಯಕ್ತಿಯೊಂದಿಗೆ ಜೂನ್ 16ರಂದು ಎರಡನೇ ವಿವಾಹ ಮಾಡಿದರು.
ಇದರಿಂದ ಮನನೊಂದ ಮಹಿಳೆ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق