ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಸ್ರೋ ವಿಜ್ಞಾನಿ ಎನ್ ವಲರ್ಮತಿ ನಿಧನ

ಇಸ್ರೋ ವಿಜ್ಞಾನಿ ಎನ್ ವಲರ್ಮತಿ ನಿಧನ

ಎಲ್ಲ ಉಡಾವಣೆಗಳ ಹಿಂದಿನ ಕೌಂಟ್‌ಡೌನ್ ಧ್ವನಿ ಇವರದು



ಬೆಂಗಳೂರು: ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಳ ಕ್ಷಣಗಣನೆಯ ಹಿಂದೆ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ಎನ್ ವಲರ್ಮತಿ ಅವರು ಹೃದಯ ಸ್ತಂಭನದಿಂದ ಶನಿವಾರ ನಿಧನರಾದರು. ಆವರ ಕೊನೆಯ ಕ್ಷಣಗಣನೆಯು ಚಂದ್ರಯಾನ-3 ಆಗಿತ್ತು. ವಲರ್ಮತಿ ಅವರು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ರೇಂಜ್ ಆಪರೇಷನ್ಸ್ ಕಾರ್ಯಕ್ರಮದ ಕಚೇರಿಯ ಭಾಗವಾಗಿದ್ದರು, ಅಲ್ಲಿ ಅವರು ಎಲ್ಲಾ ಉಡಾವಣೆಗಳ ಕ್ಷಣಗಣನೆಯನ್ನು ಘೋಷಿಸುತ್ತಿದ್ದರು.


ಇಸ್ರೋ ವಿಜ್ಞಾನಿ ಎನ್ ವಲರ್ಮತಿ ಹೃದಯ ಸ್ತಂಭನದಿಂದ ವಲರಮತಿ ಕೊನೆಯುಸಿರೆಳೆದರು ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರು ಭಾನುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಹೇಳಿದರು.


"ಅವರು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ರೇಂಜ್ ಆಪರೇಷನ್ಸ್ ಪ್ರೋಗ್ರಾಂ ಕಚೇರಿಯ ಭಾಗವಾಗಿದ್ದರು, ಅಲ್ಲಿ ಅವರು ಎಲ್ಲಾ ಉಡಾವಣೆಗಳ ಕ್ಷಣಗಣನೆಯನ್ನು ಘೋಷಿಸುತ್ತಿದ್ದರು" ಎಂದು ಇಸ್ರೋ ಪಿಆರ್‌ಓ ಹೇಳಿದರು.


ಅವರ ನಿಧನಕ್ಕೆ ಸಂತಾಪ ಸೂಚಿಸಿ, ಬಾಹ್ಯಾಕಾಶ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಪಿ.ವಿ. ವೆಂಕಟಕೃಷ್ಣನ್ ಅವರು “ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು!” ಎಂದು ಟ್ವೀಟ್ ಮಾಡಿದ್ದಾರೆ.


“ಚಂದ್ರಯಾನ-3 ಸೇರಿದಂತೆ ಅನೇಕ @isro ಉಡಾವಣಾ ಕೌಂಟ್‌ಡೌನ್‌ಗಳ ಹಿಂದಿನ ಧ್ವನಿಯಾದ ಎನ್ ವಲರಮತಿ ಜಿ ಅವರ ನಿಧನದ ಬಗ್ಗೆ ಕೇಳಿ ದುಃಖವಾಯಿತು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಓಂ ಶಾಂತಿ.” ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

0 Comments

Post a Comment

Post a Comment (0)

Previous Post Next Post