ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು: ಬಿಎಎಸ್‌ಎಫ್‌ ಆವರಣದಲ್ಲಿ ತುರ್ತು ರಕ್ಷಣೆಯ ಅಣಕು ಕಾರ್ಯಾಚರಣೆ

ಮಂಗಳೂರು: ಬಿಎಎಸ್‌ಎಫ್‌ ಆವರಣದಲ್ಲಿ ತುರ್ತು ರಕ್ಷಣೆಯ ಅಣಕು ಕಾರ್ಯಾಚರಣೆ


ಮಂಗಳೂರು:  ಮಂಗಳೂರಿನ BASF ಇಂಡಿಯಾ ಲಿಮಿಟೆಡ್ ಆವರಣದಲ್ಲಿ ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆಯನ್ನು ಪರಿಶೀಲಿಸಲು  ಆನ್-ಸೈಟ್ ಅಣಕು ಕಾರ್ಯಾಚರಣೆಯನ್ನು ನಡೆಸಿತು. ಜಿಲ್ಲಾ ವಿಪತ್ತು ನಿರ್ವಹಣಾ ತಂಡದ ಸಮ್ಮುಖದಲ್ಲಿ ಈ ಕವಾಯತು ನಡೆಸಲಾಯಿತು.


ಅಣಕು ಡ್ರಿಲ್ ಅನ್ನು ಸಾಲ್ವೆಂಟ್ ಟ್ಯಾಂಕ್ ಫಾರ್ಮ್‌ನಲ್ಲಿ ಬೆಂಕಿ ಮತ್ತು ಗಾಯದ ಸನ್ನಿವೇಶದೊಂದಿಗೆ ನಡೆಸಲಾಯಿತು. ನಂತರ ಪರಿಶೀಲನಾ ಸಭೆ ನಡೆಸಿ ನ್ಯೂನತೆಗಳ ವಿಶ್ಲೇಷಣೆ ಮತ್ತು ಅಣಕು ವ್ಯಾಯಾಮದ ಪರಾಮರ್ಶೆ ನಡೆಸಲಾಯಿತು.


ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜಯ್ ಕುಮಾರ್, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸೇವೆಗಳ ಇಲಾಖೆಯ ಸದಸ್ಯ  ಡಾ. ಜಿ. ಶ್ರೀನಿಕೇತನ್‌ ಭಾಗವಹಿಸಿದ್ದರು.  ಅಣಕು ಕಾರ್ಯಾಚರಣೆಯನ್ನು ಬಿಎಎಸ್‌ಎಫ್‌ ಅಧಿಕಾರಿಗಳು ವೀಕ್ಷಿಸಿದರು. 


ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಎಂಸಿಎಫ್‌, ಕಾರ್ಡೊಲೈಟ್‌, ಸಿಂಜಿನ್‌, ಟೋಟಲ್ ಗ್ಯಾಸ್‌, ಐಓಸಿಎಲ್‌, ಬಿಪಿಸಿಎಲ್‌  ಮತ್ತಿತರ ನೆರೆಯ ಕೈಗಾರಿಕೆಗಳ ಪ್ರತಿನಿಧಿಗಳು ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಬಿಎಎಸ್‌ಎಫ್‌ (BASF) ಇಂಡಿಯಾ ಲಿಮಿಟೆಡ್, ಮಂಗಳೂರು ಪ್ರತಿ ವರ್ಷ ಜಿಲ್ಲಾ ವಿಪತ್ತು ನಿರ್ವಹಣಾ ಗುಂಪಿನ ಉಪಸ್ಥಿತಿಯಲ್ಲಿ ಈ ಅಣಕು ಕಾರ್ಯಾಚರಣೆಯನ್ನು ನಡೆಸುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم