ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಂಠೀರವ ಸ್ಟೇಡಿಯಂ ನಲ್ಲಿ ಧ್ವಜಾರೋಹಣ; ಕರ್ನಾಟಕದಲ್ಲಿ ಹುಟ್ಟಲು 7ಜನ್ಮದ ಪುಣ್ಯಬೇಕು- ಸಿಎಂ ಬೊಮ್ಮಾಯಿ

ಕಂಠೀರವ ಸ್ಟೇಡಿಯಂ ನಲ್ಲಿ ಧ್ವಜಾರೋಹಣ; ಕರ್ನಾಟಕದಲ್ಲಿ ಹುಟ್ಟಲು 7ಜನ್ಮದ ಪುಣ್ಯಬೇಕು- ಸಿಎಂ ಬೊಮ್ಮಾಯಿ

 


ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಸ್ಟೇಡಿಯಂ ನಲ್ಲಿ ಧ್ವಜಾರೋಹಣ ಮಾಡಿದರು.


ಶಿಕ್ಷಣ ಇಲಾಖೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ, ನಾಡಿನ ಜನತೆಗೆ 67ನೇ ಕನ್ನಡ ರಾಜ್ಯೋತ್ಸವದ ಶುಭಾಷಯಗಳನ್ನು ಕೋರಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡ ನಾಡು ಪುಣ್ಯದ ಬೀಡು. ನಮ್ಮದು ಅತ್ಯಂತ ಸಂಪದ್ಭರಿತವಾದ ನಾಡು. ಕರ್ನಾಟಕ ಏಕೀಕರಣ ಹೋರಾಟವನ್ನು ಯಾರೂ ಮರೆಯುವಂತಿಲ್ಲ. ಮದ್ರಾಸ್ ಕರಾವಳಿ ಮಧ್ಯ ಕರ್ನಾಟಕ ಎಂದು ಹಂಚಿಹೋಗಿದ್ದ ಕನ್ನಡ ನಾಡನ್ನು ಹಾಲೂರು ವೆಂಕಟರಾಯರು ಹೋರಾಟ ಮಾಡಿ ಕರ್ನಾಟಕ ಏಕೀಕರಣ ಮಾಡಿದರು. ಹೋರಾಟದಲ್ಲಿ ಹಲವು ಮಹನೀಯರ ಶ್ರಮವಿದೆ ಎಂದರು.


ಶಿಕ್ಷಣ, ಆರೋಗ್ಯ, ಉದ್ಯೋಗದ ಜೊತೆಗೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ.

ಕರುನಾಡಲ್ಲಿ ನಾವು ಹುಟ್ಟಿದ್ದೇವೆ ಎಂದರೆ ಅದು 7 ಜನ್ಮದ ಪುಣ್ಯದ ಫಲ. ಕರ್ನಾಟಕದಲ್ಲಿ ಹುಟ್ಟಲು 7 ಜನ್ಮದ ಪುಣ್ಯಬೇಕು ಎಂದು ಹೇಳಿದರು.


0 تعليقات

إرسال تعليق

Post a Comment (0)

أحدث أقدم