ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ಸಾವು

ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ಸಾವು

 


ಮೈಸೂರು: ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಮೈಸೂರಿನ ಆರ್‌.ಟಿ.ನಗರದ ಸುಭಿಕ್ಷ ಗಾರ್ಡನ್ಸ್​ನಲ್ಲಿ ನಡೆದಿದೆ.


ಸತೀಶ್ (34) ಮೃತ ಗ್ರಾಮ ಪಂಚಾಯತಿ ಸದಸ್ಯ. ಕೆ.ಆರ್.ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ಹಿನ್ನೆಲೆ 11ಕ್ಕೂ ಹೆಚ್ಚು ಸದಸ್ಯರು ರೆಸಾರ್ಟ್‌ಗೆ ಬಂದಿದ್ದರು.


ಜವರೇಗೌಡ ಕೊಪ್ಪಲಿನ ನಿವಾಸಿಯಾಗಿರುವ ಸತೀಶ್​ ಕೂಡ ರೆಸಾರ್ಟ್​ಗೆ ಬಂದಿದ್ದರು. ಸತೀಶ್ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಗೆದ್ದಿದ್ದರು.


ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅಧ್ಯಕ್ಷರಾಗಲು 11 ಸದಸ್ಯರನ್ನು ಪ್ರವಾಸ ಕಳುಹಿಸಿದ್ದರು. ಈ ಸದಸ್ಯರು ಕಳೆದ 20 ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಹೋಗಿ ಬಂದಿದ್ದರು. ಸದ್ಯ 11 ಸದಸ್ಯರು ಮೈಸೂರಿನ ಆರ್‌.ಟಿ.ನಗರದ ಸುಭಿಕ್ಷ ಗಾರ್ಡನ್ಸ್​ನಲ್ಲಿ ತಂಗಿದ್ದರು. ಇದೀಗ ಸತೀಶ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.


ತಂಗಿದ್ದ ರೂಮ್​ನಲ್ಲಿಯೇ ಸತೀಶ್​ ಮೃತದೇಹ ಬಿದ್ದಿದ್ದು, ಮೈಮೇಲೆ ಬಟ್ಟೆ ಇಲ್ಲದಾಗಿದೆ. ಮೃತದೇಹದ ಪಕ್ಕದಲ್ಲೇ ಮಲ, ಮೂತ್ರ ವಿಸರ್ಜನೆ ಮಾಡಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.


0 تعليقات

إرسال تعليق

Post a Comment (0)

أحدث أقدم