ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿದ್ಯಾರ್ಥಿಗಳಲ್ಲಿ ಸಾಹಿತ್ಯದೆಡೆಗೆ ಒಲವನ್ನು ಮೂಡಿಸುವ ಕಾರ್ಯವಾಗಬೇಕು: ನಾರಾಯಣ ರೈ ಕುಕ್ಕುವಳ್ಳಿ

ವಿದ್ಯಾರ್ಥಿಗಳಲ್ಲಿ ಸಾಹಿತ್ಯದೆಡೆಗೆ ಒಲವನ್ನು ಮೂಡಿಸುವ ಕಾರ್ಯವಾಗಬೇಕು: ನಾರಾಯಣ ರೈ ಕುಕ್ಕುವಳ್ಳಿ

ಮುಂಗಾರು ಕವಿಗೋಷ್ಠಿ ಮತ್ತು ದಿ ಚಿದಾನಂದ್ ಕಾಮತ್ ಸಂಸ್ಮರಣೆ ಕಾರ್ಯಕ್ರಮ 



ಪುತ್ತೂರು: ವಿದ್ಯಾರ್ಥಿಗಳಲ್ಲಿ ಸಾಹಿತ್ಯದೆಡೆಗೆ ಒಲವನ್ನು ಮೂಡಿಸುವ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ಆಯೋಜನೆಗೊಂಡ ಕಾರ್ಯಕ್ರಮ ಯಶಸ್ಸನ್ನು ಕಂಡಿರುವುದು ಸತ್ಯ. ಚಿದಾನಂದ ಕಾಮತ್‌ರವರ ಒಡನಾಡಿಯಾಗಿದ್ದು ಈ ಕಾರ್ಯಕ್ರಮ ಭಾಗವಹಿಸಿದ್ದು ತುಂಬಾ ಖುಷಿಯ ವಿಚಾರ ಎಂದು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ಮತ್ತು ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.


ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗ ಮತ್ತು ಸ್ಮರಣೀಯ ಚಿದಾನಂದ ಕಾಸರಗೋಡು ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ಸುದಾನಶಾಲೆ ಮಂಜಲ್ಪಡ್ಪು ಇಲ್ಲಿ ಮುಂಗಾರು ಕವಿಗೋಷ್ಠಿ ಮತ್ತು ದಿ ಚಿದಾನಂದ್ ಕಾಮತ್ ಕಾಸರಗೋಡು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ  ಭಾನುವಾರ ಅವರು ಮಾತನಾಡಿದರು.

 

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಕೆಎಂಸಿಯ ನಿವೃತ್ತ ಉದ್ಯೋಗಿ ಸುದರ್ಶನ್ ಮುರ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಪ್ರೋತ್ಸಾಹ ಅಗತ್ಯ. ಮಕ್ಕಳಿಂದ ಹಿಡಿದು ಹಿರಿಯರನ್ನು ಪ್ರೋತ್ಸಾಹಿಸುವಂತಹ ಚಿದಾನಂದ್ ಕಾಮತ್ ಮಾಡುತ್ತಿದ್ದರು. ಗಡಿನಾಡಿನಲ್ಲಿ ಹುಟ್ಟಿ ಬೆಳೆದದ್ದಾರೂ ಕೂಡ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಅಭಿಮಾನ ಮೆಚ್ಚಬೇಕು. ಅವರು ಯುವ ಲೇಖಕರು ಹಾಗೂ ಕವಿಗಳಿಗೆ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದರೆ ತಪ್ಪಾಗಲಾರದು ಎಂದು ದಿ ಚಿದಾನಂದ ಕಾಮತ್ ಅವರನ್ನು ಸ್ಮರಿಸಿ ಮಾತನಾಡಿದರು.


ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ತೊಡಕುಗಳು ಇದ್ದೇ ಇರುತ್ತದೆ. ಟೀಕಿಸುವವರು, ಟಿಪ್ಪಣಿಗಳನ್ನು ಹೇಳುವವರು ಕೂಡ ಇರುತ್ತಾರೆ. ಯಶಸ್ಸನ್ನು ಕುಂಠಿತಗೊಳಿಸುವ ಹಾದಿಯ ಬಗ್ಗೆ ತಲೆಕೆಡಿಸಕೊಳ್ಳದೆ ಗುರಿಯತ್ತ ಯುವ ಪ್ರತಿಭೆಗಳು ಹೆಜ್ಜೆಯಿಡಬೇಕು. ಜೊತೆಗೆ ಸಮಾಜದಲ್ಲಿ ಸಿಗುವ ನಕರಾತ್ಮಕ ಅಂಶಗಳನ್ನು ತೊರೆದು ಧನಾತ್ಮಕ ಅಂಶಗಳನ್ನು ನಮ್ಮ ತೆಕ್ಕೆಗೆ ತೆಗದುಕೊಳ್ಳಬೇಕು ಎಂದು ನುಡಿದರು.

 

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ರೆ|ಫಾ| ವಿಜಯ್ ಹಾರ್ವಿನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಸಾಹಿತ್ಯ ಕಲೆಗೆ ಸದಾ ಪ್ರೋತ್ಸಾಹಿಸಿ ಬಳಗವನ್ನು ಬೆನ್ನು ತಟ್ಟುವ ರೆ. ಫಾ. ವಿಜಯ ಹಾರ್ವಿನ್ ರವರಿಗೆ ಚಿಗುರೆಲೆ ವತಿಯಿಂದ ಅಭಿಮಾನದ ಸನ್ಮಾನವನ್ನು ಮಾಡಲಾಯಿತು.


ಹಲವು ವಿಶೇಷತೆಯ ಕವಿಗೋಷ್ಠಿ:

ನಂತರ ನಡೆದ ಕವಿಗೋಷ್ಠಿಗೆ ಪ್ರಥಮ ಬಾರಿ ವಿಶೇಷ ಚೇತನ ಬಾಲಕ ರಕ್ಷಿತ್ ಗೋಳ್ತಮಜಲು ಚಾಲನೆ ನೀಡಿದರು.

ಏಳು ಹಂತದ ಕವಿಗೋಷ್ಠಿಗೆ ಏಳು ಕವಿಗೋಷ್ಠಿ ಅಧ್ಯಕ್ಷರು ಕವಿಗೋಷ್ಠಿಯಲ್ಲಿ ಲಿಖಿತ ಕೋಟ್ಯಾನ್, ಪುನೀತ್ ಕುಮಾರ್, ರಹಾನ, ಮೋಕ್ಷಿತಾ ಮಾಯಿಲಕೊಚ್ಚಿ, ಮಹಮ್ಮದ್ ಸಿಂಸಾರುಲ್ ಹಕ್, ಧನ್ವಿತಾ ಕಾರಂತ್, ಶ್ರೀಕಲಾ ಕಾರಂತ್, ಆಶಾ ಅಡೂರ್, ಗುಣಾಜೆ ರಾಮಚಂದ್ರ ಭಟ್, ರಮ್ಯ ಎನ್, ಬೃಂದಾ ಪಿ ಮುಕ್ಕೂರು, ಮಲ್ಲಿಕಾ ಜೆ ರೈ, ನವೀನ್ ಕುಲಾಲ್ ಚಿಪ್ಪಾರು,  ಶಿವಪ್ರಸಾದ್ ಕೊಕ್ಕಡ, ರಶ್ಮಿ ಸನಿಲ್ ಮಂಗಳೂರು, ಶಾಂತಾ ಪುತ್ತೂರು, ಶ್ರೇಯಾ ಮಿಂಚಿನಡ್ಕ, ಶ್ರೇಯಾ ಸಿ ಪಿ ಕಡಬ, ಅನನ್ಯ. ಹೆಚ್. ಸುಬ್ರಹ್ಮಣ್ಯ, ಶಿರ್ಷಿತಾ ಕಾರಂತ್, ವಿಂಧ್ಯಾ ಎಸ್. ರೈ., ಉಮಾಶಂಕರಿ ಮರಿಕೆ, ಪರಿಮಳ, ಬಾಲಕೃಷ್ಣ ಕೇಪುಳು, ಪ್ರಭಾಕರ್ ಭಟ್. ಟಿ. ಪೋಳ್ಯ, ರೇಖಾ ಸುದೇಶ್ ರಾವ್, ಜಯಾನಂದ ಪೆರಾಜೆ, ನಾರಾಯಣ ನಾಯ್ಕ ಕುದುಕೋಳಿ, ಪಂಕಜಾ ಕೆ ಮುಡಿಪು, ಆಶಾ ಮಯ್ಯ. ಪುತ್ತೂರು, ಆಶಾ ಅಡೂರ್, ಆನಂದ ರೈ ಅಡ್ಕಸ್ಥಳ, ದೀಪ್ತಿ ಅಡ್ಡಂತ್ತಡ್ಕ, ಯಾನ್ವಿ ಡಿ. ಪೂಜಾರಿ, ಸುಜಯ ಎಸ್, ಗೀತಾ ಲಕ್ಷ್ಮೀಶ್, ಶಶಿಧರ್ ಏಮಾಜೆ ಕವನ ವಾಚಿಸಿದರು.


ಅದೃಷ್ಟವಂತ ಕವಿ: ಪ್ರಥಮ ಬಾರಿ ಕವಿಗೋಷ್ಠಿ ಅಧ್ಯಕ್ಷರಾದ ಗೀತಾ ಲಕ್ಷ್ಮೀಶ್ ಮುಂಗಾರು ಕವಿಗೋಷ್ಠಿಯ ಅದೃಷ್ಟವಂತ ಕವಿಯಾಗಿ ಆಯ್ಕೆಯಾದರು. ಅದೃಷ್ಟವಂತ ಕವಿಯನ್ನು ಚೀಟಿ ಎತ್ತುವ ಮೂಲಕ ಕು. ದುರ್ಗಾಶ್ರೀ ಉರ್ಲಾoಡಿ ಆಯ್ಕೆ ಮಾಡಿದರು.


ಕಾರ್ಯಕ್ರಮದಲ್ಲಿ  ಕವಿಗೋಷ್ಠಿಯ ಸಂಚಾಲಕಿ ಚೈತ್ರ ಮಾಯಿಲಕೊಚ್ಚಿ, ಸಂಯೋಜಕ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.


ಅಪೂರ್ವ ಕಾರಂತ್ ಪ್ರಾರ್ಥಿಸಿದರು. ಮಂಜುಶ್ರೀ ನಲ್ಕ ಸ್ವಾಗತಿಸಿ, ಅನ್ನಪೂರ್ಣ ಎನ್. ಕೆ. ವಂದಿಸಿದರು. ಪ್ರತೀಕ್ಷಾ ಆರ್ ಕಾವು ಮತ್ತು ಸಮ್ಯಕ್ತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಪ್ರೀತಾ ಚರಣ್ ಪಾಲಪ್ಪೆ ಕಡಬ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post