ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದ ಯುವಕ ಅಪಘಾತ ದಲ್ಲಿ ಸಾವು

ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದ ಯುವಕ ಅಪಘಾತ ದಲ್ಲಿ ಸಾವು

 


ತುಮಕೂರು: ಸಂಡೇ ಜಾಲಿ ರೈಡ್​ ಹೊರಟಿದ್ದ ಬೈಕ್​ ರೈಡರ್​ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯೊಂದು ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ.


ಬೆಂಗಳೂರಿನ ಬನಶಂಕರಿ ನಿವಾಸಿ ಸೂರಜ್ (27) ಮೃತ ದುರ್ದೈವಿ.


ಸೂರಜ್ ಬೆಂಗಳೂರಿನಿಂದ ರೈಡ್ ಹೊರಟಿದ್ದು, ಗವಿಮಠ ಬಳಿ ಬರುತ್ತಿದ್ದಂತೆ ಬೈಕ್​ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ. ನಂತರ ನಿಯಂತ್ರಣ ತಪ್ಪಿ ಬೈಕ್​ ಸೇತುವೆಯಿಂದ ಕೆಳಗೆ ಬಿದ್ದಿದೆ. ರೈಡರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


0 Comments

Post a Comment

Post a Comment (0)

Previous Post Next Post