ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೀಮರಾವ್ ವಾಷ್ಠರ್ ರಿಗೆ ಸರ್ವಜ್ಞ ಸಂಜೀವಿನಿ ರಾಜ್ಯ ಪ್ರಶಸ್ತಿ ಪ್ರದಾನ

ಭೀಮರಾವ್ ವಾಷ್ಠರ್ ರಿಗೆ ಸರ್ವಜ್ಞ ಸಂಜೀವಿನಿ ರಾಜ್ಯ ಪ್ರಶಸ್ತಿ ಪ್ರದಾನ

 


ಸುಳ್ಯ: ಇಲ್ಲಿನ ಖ್ಯಾತ ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್ .ಭೀಮರಾವ್ ವಾಷ್ಠರ್ ರವರಿಗೆ ರಾಯಚೂರು ಜಿಲ್ಲೆಯ ಮಸ್ಕಿ  ತಾಲೂಕಿನ  ಬೇಡರ  ಕಾರಲಕುಂಟಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ಸರ್ವಧರ್ಮದ  ಸಮ್ಮೇಳನದಲ್ಲಿ ಇವರ ಸಾಧನೆ ಪರಿಗಣಿಸಿ 2022 ನೇ ಸಾಲಿನ ಸರ್ವಜ್ಞ ಸಂಜೀವಿನಿ ರಾಜ್ಯ ಪ್ರಶಸ್ತಿ  ನೀಡಿ ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತೆ  ಮಾತಾ ಮಂಜಮ್ಮ ಜೋಗತಿರವರು ನೆರವೇರಿಸಿದರು.

 ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ್  ಮಹಾಸ್ವಾಮಿಗಳು , ಆನಾಹೊಸುರ್ ಮಠಾಧಿಪತಿಗಳು,  ನಾಗರಹಾಳದ ನಿರುಪಾದಿ ಕವಿಗಳು ,ಯುವಕವಿ ವಿಜಯ್ ದಾಸ್ ನವಲಿ , ಇನ್ನಿತರರು ಉಪಸ್ಥಿತರಿದ್ದರು .


web counter

0 تعليقات

إرسال تعليق

Post a Comment (0)

أحدث أقدم