ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಸ್ತಕ ಪ್ರೀತಿಯು ಜೀವನ ಪ್ರೀತಿಯನ್ನು ಪೋಷಿಸುತ್ತದೆ: ಉಷಾಲತಾ ಸರಪಾಡಿ

ಪುಸ್ತಕ ಪ್ರೀತಿಯು ಜೀವನ ಪ್ರೀತಿಯನ್ನು ಪೋಷಿಸುತ್ತದೆ: ಉಷಾಲತಾ ಸರಪಾಡಿ


ಮಂಗಳೂರು: "ಪ್ರಾಮಾಣಿಕನಾದ ಓದುಗನಿಗೆ, ಬರಹಗಾರನಿಗೆ, ರಂಗಭೂಮಿ ಕಲಾವಿದನಿಗೆ ಆತ್ಮವಂಚನೆ ಇಲ್ಲದೆ ಜಗತ್ತನ್ನು ಪ್ರೀತಿಸಲು ಮತ್ತು ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನವಾಗಲಿ, ಸಾಹಿತ್ಯವಾಗಲಿ ಎರಡರ ಆಶಯವೂ ಒಂದೇ- ಪರಹಿತವನ್ನು ಸಾಧಿಸುವುದು. ಪುಸ್ತಕ ಪ್ರೀತಿಯು ಜೀವನಪ್ರೀತಿಯನ್ನು ಪೋಷಿಸುತ್ತದೆ" ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಸಹಾಯಕ ನಿಲಯ ನಿರ್ದೇಶಕಿ ಶ್ರೀಮತಿ ಉಷಾಲತಾ ಸರಪಾಡಿ  ಅಭಿಪ್ರಾಯಪಟ್ಟರು.


ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಉರ್ವಸ್ಟೋರಿನ ಸಾಹಿತ್ಯಸದನದಲ್ಲಿ ಕಳೆದ ಶನಿವಾರ ಅಪರಾಹ್ನ ಆಯೋಜಿಸಲಾಗಿದ್ದ 'ಶಾರದಾ ಭಟ್ ಹಾಗೂ ಶ್ರೀಕಲಾ ಉಡುಪ ದತ್ತಿನಿಧಿ ಕಾರ್ಯಕ್ರಮ'ದಲ್ಲಿ ಅವರು 'ಆಧುನಿಕ ರಂಗಭೂಮಿ-  ಸವಾಲು ಸಾಧ್ಯತೆಗಳು' ಎಂಬ ದತ್ತಿ ಉಪನ್ಯಾಸ ನೀಡಿದರು.


ಶ್ರೀಕಲಾ ಉಡುಪ ಅವರು 'ಮಂಥರೆ' ನಾಟಕವಾಚನದ ಮುಖೇನ ಮಂಥರೆಯ ದ್ವಂದ್ವಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟರು.  


ಬಡಾ ಎರ್ಮಾಳು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾಯಿರು ಅಧ್ಯಕ್ಷತೆ ವಹಿಸಿದ್ದರು. ಅ.ನ. ಪೂರ್ಣಿಮಾ ಅವರು ಸಂದರ್ಭೋಚಿತವಾದ ರಂಗಗೀತೆಗಳನ್ನು ಹಾಡಿದರು. ಅರುಣಾ ನಾಗರಾಜ್ ವಂದಿಸಿದರು. ಗುಣವತಿ ರಮೇಶ್ ಸ್ವಾಗತಿಸಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم