ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಮತ್ತು ಟ್ರ್ಯಾಕ್ಟರ್ ಅಪಘಾತ; ಮೂವರು ಸಾವು

ಕಾರು ಮತ್ತು ಟ್ರ್ಯಾಕ್ಟರ್ ಅಪಘಾತ; ಮೂವರು ಸಾವು

 



ಬಾಗಲಕೋಟೆ: ಕಾರಿಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆಯೊಂದು ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಗದಗ ಬಾಗಲಕೋಟೆ ಮಾರ್ಗದಲ್ಲಿ ನಡೆದಿದೆ.


ಬಸನಗೌಡ ಪಾಟಿಲ್(60), ಮಂಜುನಾಥ ಮಾರನಬಸರಿ(38) ಹಾಗೂ ಸಂಗಮ್ಮ ಪಾಟೀಲ್​(55) ಮೃತ ದುರ್ದೈವಿಗಳು.


ಮೃತರು ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮಕ್ಕೆ ಬಂದಿದ್ದರು.

ಸಂಜೆ ವೇಳೆ ಕಾರ್ಯ ಮುಗಿಸಿ ರಾತ್ರಿ ತಮ್ಮ ಊರಿಗೆ ವಾಪಸ್​ ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಟ್ರ್ಯಾಕ್ಟರ್​ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ


0 تعليقات

إرسال تعليق

Post a Comment (0)

أحدث أقدم