ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೈಕ್ ಮತ್ತು ಲಾರಿ ಅಪಘಾತ; ಇಬ್ಬರು ಸಾವು

ಬೈಕ್ ಮತ್ತು ಲಾರಿ ಅಪಘಾತ; ಇಬ್ಬರು ಸಾವು

 


ಹುಬ್ಬಳ್ಳಿ: ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ನಡೆದಿದೆ. ನೂರ್ ಅಹ್ಮದ್ ಮತ್ತು ಜಾವೀದ್ ಪಠಾಣ್ ಮೃತ ದುರ್ದೈವಿಗಳು.

ಮೃತರಿಬ್ಬರು ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆಯಿದ್ದ ಕಾರಣ ಗೋವಾಗೆ ತೆರಳಿದ್ದರು.

ಗೋವಾದಿಂದ ವಾಪಸ್​ ಹಿಂತಿರುಗಿ ಬರುವ ವೇಳೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم