ಬೆಂಗಳೂರು: ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿ ಮಾರಣಾಂತಿಕ ಹಲ್ಲೆಯಿಂದ ಕೊಲೆಯಾಗಿರುವ ಘಟನೆಯೊಂದು ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಬಳಿ ನಡೆದಿದೆ. ಡಾಭಾ ಮಾಲೀಕ ಪ್ರಕಾಶ ನಾಗನೂರು (38) ವರ್ಷ ಮೃತ ದುರ್ದೈವಿ.
ನಿನ್ನೆ ಸಂಜೆ ಯುವಕರ ಎರಡು ತಂಡಗಳು ಪ್ರಕಾಶ್ ಡಾಭಾ ಕ್ಕೆ ಬಂದಿದ್ದರು. ಮೊದಲು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಮತ್ತೆ ಜಗಳ ಇನ್ನೂ ಹೆಚ್ಚಾಯಿತು.
ಇದನ್ನು ಕಂಡ ಪ್ರಕಾಶ್ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ್ದಾರೆ. ಈ ವೇಳೆ ಯುವಕರು ಪ್ರಕಾಶ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

إرسال تعليق