(ಸಾಂದರ್ಭಿಕ ಚಿತ್ರ)
ಧರ್ಮಸ್ಥಳ: ಅನ್ನ ಅಕ್ಷರ, ಅಭಯ, ಔಷಧ ದಾನಗಳ ಮೂಲಕ ಚತುರ್ದಾನ ಪರಂಪರೆಯ ಕ್ಷೇತ್ರವೆಂದೇ ಹೆಸರಾದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯು.ಆರ್.ಎಸ್ ಏಷ್ಯಾ ಒನ್ ಸಂಸ್ಥೆಯ 6ನೇ ಆವೃತ್ತಿಯ 2020-21ನೇ ಸಾಲಿನ ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶಿಕ್ಷಣ ಸಂಸ್ಥೆ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣರಾದ ವೀರೇಂದ್ರ ಹೆಗ್ಗಡೆಯವರು ಸಮಾಜಮುಖಿ ಕಾರ್ಯಗಳ ತೊಡಗಿಸಿಕೊಂಡಿದ್ದು, ಜನರ ಕಷ್ಟಗಳಿಗೆ ಸದಾ ಸ್ಪಂದಿಸುವ ಇವರು ದೇಶ, ಭಾಷೆಗಳ ಗಡಿ ಮೀರಿ ಜನಮನ್ನಣೆಗಳಿಸಿದ್ದಾರೆ.
ಸಮಾಜದ ಸಂಕಷ್ಟಗಳಿಗೆ ಸಂಧಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದು, ಕೋವಿಡ್ ವಿರುದ್ಧ ಹೋರಾಟದಲ್ಲಿ ಇವರ ಕೊಡುಗೆ ಅಪಾರ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ

إرسال تعليق