ಬೆಳ್ತಂಗಡಿ: ಫಲ್ಗುಣಿ ನವೋದಯ ಸ್ವಸಹಾಯ ಗುಂಪು ಸೂಳಬೆಟ್ಟು ಇದರ ವತಿಯಿಂದ ವಿವಿಧೆಡೆ ವನಮಹೋತ್ಸವ ನೆರವೇರಿಸಲಾಯಿತು.
ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ರೌದ್ರಭೈರವಿ ಸಹಪರಿವಾರ ಹೋರಾಡಿ ದೈವಸ್ಥಾನ, ಸೂಳಬೆಟ್ಟು ಸ.ಕಿ.ಪ್ರಾ.ಶಾಲೆ ಹಾಗೂ ಅಂಗನವಾಡಿ ವಠಾರದಲ್ಲಿ ಗುಂಪಿನ ಸದಸ್ಯೆಯರು ಆದಿತ್ಯವಾರ ಹಣ್ಣಿನ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು.
ಗುಂಪಿನ ಅಧ್ಯಕ್ಷೆ ರೇಖಾ ಮೆಹೆಂದಳೆ, ಕಾರ್ಯದರ್ಶಿ ಚೈತ್ರಾ ನಾತು, ಸದಸ್ಯೆಯರಾದ ಪ್ರಜ್ಞಾ ಮೆಹೆಂದಳೆ, ಸಂಧ್ಯಾ ಗೋಖಲೆ, ಶ್ರೀದೇವಿ ಮರಾಠೆ, ಛಾಯಾ ಗೋಖಲೆ, ರಮ್ಯಾ ಜೋಶಿ, ಸುಜಾತಾ ಆಠವಳೆ, ನಿವೇದಿತಾ ಜೋಶಿ, ಪದ್ಮಶ್ರೀ ಚಿಪ್ಳೂಣಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ, ಹೋರಾಡಿ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ಜೋಶಿ, ಸ್ಥಳೀಯರಾದ ಪ್ರಭಾಕರ ಆಠವಳೆ, ಹರೀಶ ಸಾಲಿಯಾನ್, ಜೋಯೆಲ್, ಕಾಜು, ಓಬಯ, ರಾಜೇಂದ್ರ ಗೋಖಲೆ, ದೀಪಕ ಆಠವಳೆ, ಶಿವಪ್ರಸಾದ ಚಿಪ್ಳೂಣಕರ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق