ಸುಳ್ಯ: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಖ್ಯಾತ ಗಾಯಕ ಕರುನಾಡ ಗಾನಗಂಧರ್ವ ಬಿರುದು ಪಡೆದಿರುವ ಮಿಥುನ್ ರಾಜ್ ವಿದ್ಯಾಪುರ ಅವರು ತೀರ್ಪುಗಾರರಾಗಿದ್ದರು .
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ಅಧ್ಯಕ್ಷತೆ ವಹಿಸಿದ್ದರು . ಶಾಂತಾ ಕುಂಟಿನಿ ಅವರು ಮುಖ್ಯ ಅತಿಥಿಗಳಾಗಿದ್ದರು . ತೀರ್ಪುಗಾರರಾದ ಮಿಥುನ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಸಹ ತೀರ್ಪುಗಾರರಾಗಿ ಗಾಯಕ ಪದ್ಮರಾಜ್ ಚಾರ್ವಾಕ ಸಹಕರಿಸಿದರು. ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಸ್ವಾಗತಿಸಿದರು . ಸುಮಂಗಲ ಕೋಳಿವಾಡ ರವರು ನಿರೂಪಿಸಿದರು. ಸಂಗೀತ ಸ್ಪರ್ಧೆಯ ಫಲಿತಾಂಶ ಹೀಗಿದೆ . ವಿನ್ನರ್ ಆಗಿ ವಾಷ್ಠರ್ ಸ್ಟಾರ್ ಸಿಂಗರ್ ಎಂಬ ಬಿರುದನ್ನೂ ಕೂಡ ಮಹೇಶ್ ಮಂಜೇಶ್ವರ್ ಅವರು ಬಹುಮಾನ ಪಡೆದರು ರನ್ನರ್ ಬಹುಮಾನವನ್ನು ಇಬ್ಬರು ಪಡೆದರು . ಕು ಎಲ್ವಿಶಾ ಮತ್ತು ಅಶ್ವಿಜ್ ಆತ್ರೇಯ ರವರು ವಾಷ್ಠರ್ ಬೆಸ್ಟ್ ಸಿಂಗರ್ ಬಿರುದಿನ ಜೊತೆ ರನ್ನರ್ ಬಹುಮಾನ ಪಡೆದರು. ಭಾಗ್ಯಶ್ರೀ ದೊಡ್ಡತೋಟ ಮತ್ತು ಅಶ್ಮಿತ್ ಎ ಜೆ ಮಂಗಳೂರು ಅವರು ಪ್ರೋತ್ಸಾಹಕ ಬಹುಮಾನ ಪಡೆದರು . ಪೂರ್ಣಿಮಾ ತೋಟಪ್ಪಾಡಿ ಅವರು ವಂದಿಸಿದರು .
Post a Comment