ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಮರಕ್ಕೆ ಡಿಕ್ಕಿ; ಲಾರಿಯಲ್ಲಿದ್ದ 24 ಟನ್ ಹತ್ತಿ ಭಸ್ಮ

ಲಾರಿ ಮರಕ್ಕೆ ಡಿಕ್ಕಿ; ಲಾರಿಯಲ್ಲಿದ್ದ 24 ಟನ್ ಹತ್ತಿ ಭಸ್ಮ

 


ವಿಜಯಪುರ: ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿ ತುಂಬಿದ ಲಾರಿ ಹೊತ್ತಿ ಉರಿದ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನ ಚಡಚಣ- ಬರಡೋಲ ರಸ್ತೆಯಲ್ಲಿ ನಡೆದಿದೆ.


ಹತ್ತಿ ತುಂಬಿಕೊಂಡ ಲಾರಿ, ಮೈಸೂರಿಗೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ 24 ಟನ್ ಹತ್ತಿ ಭಸ್ಮವಾಗಿದೆ.


ಅಲ್ಲದೇ, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲಿನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. 


ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

0 Comments

Post a Comment

Post a Comment (0)

Previous Post Next Post