ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸರ್ಕಾರಿ ಬಸ್ ಮತ್ತು ಬೈಕ್ ಅಪಘಾತ; ಪೋಲಿಸ್ ಪೇದೆ ಸಾವು

ಸರ್ಕಾರಿ ಬಸ್ ಮತ್ತು ಬೈಕ್ ಅಪಘಾತ; ಪೋಲಿಸ್ ಪೇದೆ ಸಾವು

 


ಕೆಜಿಎಫ್​: ತುಮಕೂರು ಹೊರವಲಯದ ಕ್ಯಾತ್ಸಂದ್ರ ಸಮೀಪ ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಕೆಜಿಎಫ್​ ಪೊಲೀಸ್​ ಜಿಲ್ಲೆಯ ನಾಗರಿಕ ಪೊಲೀಸ್​ ಪೇದೆ ಎಸ್​.ಆರ್​.ಬಾಲಕೃಷ್ಣ (27) ಮೃತಪಟ್ಟಿದ್ದಾರೆ.


ನಗರದ ಉರಿಗಾಂ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಕೃಷ್ಣ ಭಾನುವಾರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಕಗಡ ತನ್ನ ಊರಿಗೆ ಹೋಗಿದ್ದರು.


ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ಕೆಜಿಎಫ್​ಗೆ ಬರುತ್ತಿದ್ದಾಗ ಸಾರಿಗೆ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಕ್ಯಾತ್ಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಬಾಲಕೃಷ್ಣ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ಶಕಗಡದಲ್ಲಿ ಪೊಲೀಸ್​ ಇಲಾಖೆ ಗೌರವಗಳೊಂದಿಗೆ ನೆರವೇರಿಸಲಾಯಿತು.

ಉರಿಗಾಂ ಸಿಪಿಐ ವೆಂಕಟರಾಮಪ್ಪ ಹಾಗೂ ನೂರಾರು ಪೊಲೀಸರು ಅಂತಿಮ ದರ್ಶನ ಪಡೆದರು.


0 تعليقات

إرسال تعليق

Post a Comment (0)

أحدث أقدم