ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲಾವಿದೆಯ ಮೇಲೆ ಆ್ಯಸಿಡ್ ದಾಳಿ

ಕಲಾವಿದೆಯ ಮೇಲೆ ಆ್ಯಸಿಡ್ ದಾಳಿ

 


ಬೆಂಗಳೂರು: ಕಲಾವಿದೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆಯೊಂದು ನಂದಿನಿ ಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ನಡೆದಿದೆ. ಮಾರ್ಚ್​ 18ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೇವಿ ಆ್ಯಸಿಡ್ ದಾಳಿಗೊಳಗಾದ ರಂಗಭೂಮಿ ಕಲಾವಿದೆ. ಮನೆಯ ಜಗಲಿಯಲ್ಲಿ ಮಲಗಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಲಾಗಿದೆ.

ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ, ಅನಾರೋಗ್ಯ ಹಿನ್ನೆಲೆ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು.

ಇದೀಗ ರಂಗಭೂಮಿಯ ಸಹ ಕಲಾವಿದರೇ ಆ್ಯಸಿಡ್ ದಾಳಿ ನಡೆಸಿರುವುದು ಬಯಲಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ರಮೇಶ್, ಸ್ವಾತಿ, ಯೋಗೇಶ್ ಬಂಧಿತರು. ಸ್ವಾತಿ ಎಂಬಾಕೆ ಆರೋಪಿ ರಮೇಶ್​ಗೆ ಆ್ಯಸಿಡ್ ತಂದು ಕೊಟ್ಟು ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


hit counter

0 Comments

Post a Comment

Post a Comment (0)

Previous Post Next Post