ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎತ್ತಿನಗಾಡಿ ಓಡಿಸುವ ವೇಳೆ ಪಾದಚಾರಿ ಗೆ ಡಿಕ್ಕಿ; ವ್ಯಕ್ತಿ ಸಾವು

ಎತ್ತಿನಗಾಡಿ ಓಡಿಸುವ ವೇಳೆ ಪಾದಚಾರಿ ಗೆ ಡಿಕ್ಕಿ; ವ್ಯಕ್ತಿ ಸಾವು

 


ಚಿಕ್ಕಮಗಳೂರು: ಪೈಪೋಟಿಯಲ್ಲಿ ಎತ್ತಿನಗಾಡಿ ಓಡಿಸಿದ ವೇಳೆ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ.

ಮೃತರನ್ನು , ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ನಿವಾಸಿ ಜಕಣಾಚಾರಿ (49) ಎಂದು ಗುರುತಿಸಲಾಗಿದೆ.

ಅಂತರಗಟ್ಟೆ ಜಾತ್ರೆಗೆ ತೆರಳುತ್ತಿದ್ದ ಎತ್ತಿನಗಾಡಿಗಳು ವೇಗವಾಗಿ ಓಡಿಸಲು ಪೈಪೋಟಿ ನಡೆಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅತೀ ವೇಗದಲ್ಲಿ ಚಲಿಸಿದ ಎತ್ತಿನಗಾಡಿ ಜಕಣಾಚಾರಿಗೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಜಕಣಾಚಾರಿ ಮೃತಪಟ್ಟಿದ್ದಾರೆ. ರಾಸುಗಳಿಗೂ ಗಾಯಗಳಾಗಿವೆ.

0 Comments

Post a Comment

Post a Comment (0)

Previous Post Next Post