ಮುಂಬಯಿ ಮಹಾನಗರದಲ್ಲಿ ಕಳೆದ 40 ವರ್ಷಗಳಿಂದ ಅತ್ಯುತ್ತಮ ಛಾಯಾಗ್ರಾಹಕರೆಂದು ಹೆಸರು ಪಡೆದಿದ್ದ ಕೆ. ಪುರುಷೋತ್ತಮ ಶೆಟ್ಟಿ (59) ಆಗಸ್ಟ್ 2 ರಂದು ನಿಧನರಾದರು.
ಕೆಲಕಾಲದ ಅನಾರೋಗ್ಯದಿಂದಾಗಿ ಹೂಟ್ಟೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕುಳಾಯಿ ಶೆಟ್ಟಿ ಐಸ್ ಕ್ರೀಮ್ ಬಳಿಯ ಕಮಲ ಕಂಪೌಂಡ್ನಲ್ಲಿ ವಾಸವಾಗಿದ್ದರು.
ಮುಂಬಯಿಯ ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪುರುಷೋತ್ತಮ ಶೆಟ್ಟಿ ಹಲವಾರು ಸಾರ್ವಜನಿಕ ಸಮಾರಂಭಗಳು ಹಾಗೂ ಸಾಂದರ್ಭಿಕ ಘಟನೆಗಳನ್ನು ತಮ್ಮ ಕೆಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದು ಅವು ಸಾರ್ವಕಾಲಿಕ ದಾಖಲೆಗಳಾಗಿ ಉಳಿದಿವೆ.
ಅವರು ಪತ್ನಿ, ಪುತ್ರ, ಅಣ್ಣ,ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಭಾವ ಮಂಗಳೂರಿನ ಹೋಟೆಲ್ ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment