ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳ ಸಂಪಾದಕರಾದ ಎನ್ನೇಬಿ ಅವರಿಗೆ ಕೆಯುಡಬ್ಲ್ಯೂ ಜೆ ಪ್ರಶಸ್ತಿ

ಮಂಗಳ ಸಂಪಾದಕರಾದ ಎನ್ನೇಬಿ ಅವರಿಗೆ ಕೆಯುಡಬ್ಲ್ಯೂ ಜೆ ಪ್ರಶಸ್ತಿ

 


ಪುತ್ತೂರು:  ಮಂಗಳದ ಸಂಪಾದಕರಾದ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ 2023ರ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


 ಪತ್ರಿಕೋದ್ಯಮ ಕ್ಷೇತ್ರದಲ್ಲಿ 38ವರ್ಷಗಳ ಅನುಭವ ಹೊಂದಿದವರಾಗಿದ್ದು, ಕತೆಗಾರ,ಅನುವಾದಕರು, ಕಥಾಸಂಕಲನಕಾರರು, 20ಕ್ಕೂ ಹೆಚ್ಚಿನ ಕಾದಂಬರಿ ಬರೆದವರು. ಮಲಯಾಳಂ ನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. 


ಇವರ ಸಾಧನೆಗೆ  ಫೆ. 4 ,5 ರಂದು ವಿಜಯಪುರದಲ್ಲಿ ನಡೆಯುವ ರಾಜ್ಯ ಪತ್ರಕರ್ತರ ಸಂಘದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

0 Comments

Post a Comment

Post a Comment (0)

Previous Post Next Post