ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಖೇಶ್ ಅಂಬಾನಿ ಅವರ ಪುತ್ರ ಶಿರಡಿ ಮಂದಿರಕ್ಕೆ 1ಕೋಟಿ 51 ಲಕ್ಷ ರೂ. ದೇಣಿಗೆ

ಮುಖೇಶ್ ಅಂಬಾನಿ ಅವರ ಪುತ್ರ ಶಿರಡಿ ಮಂದಿರಕ್ಕೆ 1ಕೋಟಿ 51 ಲಕ್ಷ ರೂ. ದೇಣಿಗೆ

 


ಶಿರಡಿ(ಮಹಾರಾಷ್ಟ್ರ): ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದು, ಈ ವೇಳೆ ಉದ್ಯಮಿ ಅನಂತ್ ಅಂಬಾನಿ ಸಾಯಿಬಾಬಾ ಸಂಸ್ಥೆಗೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಸಾಯಿ ಬಾಬಾಗೆ ಅನಂತ್​​ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.


ಸಾಯಿ ಸಂಸ್ಥೆಯ ಸಿಇಒ ಭಾಗ್ಯಶ್ರೀ ಬನಾಯತ್, ಮುಖೇಶ್​ ಅಂಬಾನಿ ಪುತ್ರ ಸಾಯಿಬಾಬಾ ಮಂದಿರಕ್ಕೆ ದೇಣಿಗೆ ನೀಡಿದ ಬಗ್ಗೆ ತಿಳಿಸಿದರು.

ಶಿರಡಿ ಸಾಯಿಬಾಬಾ ಭಕ್ತರಾಗಿರುವ ಅಂಬಾನಿ ಕುಟುಂಬವು ಸಾಯಿಬಾಬಾಗೆ ಯಾವಾಗಲೂ ಅಪಾರವಾದ ದೇಣಿಗೆಗಳನ್ನು ನೀಡುತ್ತಾರೆ.


ಸಾಯಿಬಾಬಾಗೆ ಶಿರಡಿ ಮಜೆ ಪಂಢರಪುರದ ಕಿರು ಆರತಿ ಮಾಡಿದ ಅನಂತ್,​ ಪಾಡ್ಯ ಪೂಜೆ ನೆರವೇರಿಸಿದರು. ಸಾಯಿಬಾಬಾ ದರ್ಶನದ ಬಳಿಕ ಸಾಯಿ ಸಂಸ್ಥಾನದ ಸಿಇಒ ಭಾಗ್ಯಶ್ರೀ ಬನಾಯತ್ , ಅನಂತ್ ಅಂಬಾನಿಗೆ ಸಾಯಿ ಶಾಲು ಹೊದಿಸಿ ಸನ್ಮಾನಿಸಿದರು.


ಈ ವೇಳೆ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಸಾಯಿಚಾರಿ ಅವರಿಗೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದರು.

ದೇಣಿಗೆ ಚೆಕ್ ಅನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇದೇ ವೇಳೆ ಹಸ್ತಾಂತರಿಸಲಾಯಿತು.


0 Comments

Post a Comment

Post a Comment (0)

Previous Post Next Post