ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲೇಖಕ ತಾರಾನಾಥ್ ಮೇಸ್ತ ಶಿರೂರು ಅವರ "ಅವಧೂತ ಚರಿತಾಮೃತ" ಗ್ರಂಥ ಬಿಡುಗಡೆ

ಲೇಖಕ ತಾರಾನಾಥ್ ಮೇಸ್ತ ಶಿರೂರು ಅವರ "ಅವಧೂತ ಚರಿತಾಮೃತ" ಗ್ರಂಥ ಬಿಡುಗಡೆ



ಉಡುಪಿ: ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು, ಬರೆದಿರುವ "ಅವಧೂತ ಚರಿತಾಮೃತ- ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ" ಆಧ್ಯಾತ್ಮ ಕೃತಿ, ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದ ಹಲವು ನಿತ್ಯಾನಂದ ಮಂದಿರಗಳಲ್ಲಿ ಸದ್ಗುರುಗಳ ಪಾದತಳದಲ್ಲಿ ಸಮರ್ಪಣೆಗೊಳಿಸುವ ಮೂಲಕ ಬಿಡುಗಡೆಗೊಳಿಸಲಾಯಿತು.


ಗಣೇಶಪುರಿ, ಬಾಂಡುಪ್, ಉಡುಪಿ, ಕೊಲ್ಲೂರು, ಬೈಂದೂರು, ಮಂಗಳೂರಿನ ಬಂದರು ರಸ್ತೆ, ಮಣ್ಣಗುಡ್ಡೆ, ಮರಕಡ, ಬಂಟ್ವಾಳ ಇಲ್ಲಿರುವ ಸದ್ಗುರು ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಮಂದಿರಗಳಲ್ಲಿ ಅವಧೂತ ಚರಿತಾಮೃತ ಗ್ರಂಥದ ಸಮರ್ಪಣೆಯು ನಡೆಯಿತು. ಕೃತಿಗಳು ಬೇಕಾದವರು ಲೇಖಕರ ಸಂಪರ್ಕ ಸಂಖ್ಯೆ 7760421868 ಸಂಪರ್ಕಿಸಬಹುದು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post